Thursday, 17 August 2017

ನಕಲಿ ಸಮುದಾಯ ರಕ್ಷಕರ ಬುಡಕ್ಕೆ ಕೊಡಲಿಯೇಟು ಕೊಟ್ಟರೇ Mr. ಶಾಫಿ ಸ-ಅದಿ, ಅಲುಗಾಡುತ್ತಿದೆ ನಕಲಿಗಳ ಅಡಿಪಾಯ


ಸಾಮಾಜಿಕ ಜಾಲತಾಣಗಳಲ್ಲಿ ಕಂಠ ಬಿರಿಯುವಂತೆ ಬೊಬ್ಬಿಡುತ್ತಿದ್ದ ನಕಲಿಗಳ ಜಂಘಾಬಲವೇ ಉಡುಗಿ ಹೋಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸಮುದಾಯದ ಸ್ವಾಸ್ಥ್ಯವನ್ನು ಕೆಡಿಸಿ ಆರೋಪದ ಮೇಲೆ ಆರೋಪ ಹೊರಿಸಿ ನಾವೇ ದೊಡ್ಡ ಸಾಚರು, ಮುಸ್ಲಿಯಾರ್ ಗಳು ಆರ್.ಎಸ್.ಎಸ್ ಪೋಷಿತ ಎಂ.ಆರ್.ಎಂ ಏಜೆನ್ಸಿಗಳು ಎಂದು ಸುಳ್ಳು ಆರೋಪಗಳನ್ನು ಮಾಡಿ ಸಮುದಾಯದ ಮಧ್ಯೆ ಬಿರುಕನ್ನು ಉಂಟುಮಾಡಲು ಶ್ರಮಿಸುತ್ತಿದ್ದ ನಕಲಿಗಳಿಗೆ ಮಿಸ್ಟರ್ ಶಾಫಿ ಸ-ಅದಿ ಕೊಟ್ಟ ಟಾಂಗ್ ಅತ್ತ ಏಳಲಾರದೆ ಇತ್ತ ಬೀಳಲಾರದೆ ಹೊರಳಾಡುವಂತಹ ಪರಿಸ್ಥಿತಿ ಎದುರಾಗಿದೆ.
*ಮುಗ್ಧ ಯುವಕರನ್ನು  ದಾರಿ ತಪ್ಪಿಸಿ ತಮ್ಮ ರಾಜಕೀಯ ಬೇಲೆ ಬೇಯಿಸುತ್ತಿರುವ ನಕಲಿಗಳಿಗೆ ಕಂಟಕವಾಗಿರುವುದು ಇಲ್ಲಿನ ಮುಸ್ಲಿಯಾರ್ಗಳು ಎಂಬುದು ಸೂರ್ಯ ಬೆಳಕಿನಷ್ಷೇ ಸತ್ಯ*.

ಅವರ ಪ್ರತಿಯೊಂದು ಕಾರ್ಯಕ್ರಮಗಳನ್ನು ವಿಮರ್ಶಿಸಿ ಯುವಕರನ್ನು ದೂರಸರಿಯುವಂತೆ ಮಾಡಿ  ನಿಷ್ಕ್ರೀಯಗೊಳಿಸಿದೆ ನಮ್ಮ ಸಯ್ಯದ್ ಸಾದತ್ ಗಳು ಮತ್ತು ಆಲಿಮ್ ಗಳು. ಅವರನ್ನು ಈ ರೀತಿ ಸುಳ್ಳಾರೋಪ ಹೊರಿಸಿ ಮೂಲೆಗುಂಪು ಮಾಡಿದರೆ ತಮ್ಮ ಕಾರ್ಯ ಸಾದಿಸಬಹುದು ಎಂದು ತಿರುಕನ ಕನಸು ಕಾಣುತ್ತಿದ್ದ ನಕಲಿಗಳಿಗೆ ಶಾಫಿ ಸ-ಅದಿ ನೀಡಿದ ಒಂದೊಂದು ಮಾತುಗಳು ನಿದ್ದೆಯಲ್ಲೂ ಕನವರಿಸುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.

ಲಕ್ಷಗಟ್ಟಲೆ ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿ ಸೌಲಭ್ಯಗಳನ್ನು ನೀಡಿ ಧಾರ್ಮಿಕ ಮತ್ತು ಲೌಖಿಕ ವಿದ್ಯಾಭ್ಯಾಸ ನೀಡಿ ಸಮಾಜಕ್ಕೆ ಮತ್ತು ಸಮುದಾಯಕ್ಕೆ ಬೆಲೆ ಕಟ್ಟಲಾಗದ ಸಂಪತ್ತಾಗಿ ಮಾರ್ಪಡಿಸುತ್ತಿರುವ ಅಸಂಖ್ಯಾತ ಉಲಾಮಾಗಳನ್ನು  ಮೂಲೆಗುಂಪು ಮಾಡಿ ಈ ನಕಲಿಗಳು ಅದೇನು ಸಾಧಿಸಲು ಹೊರಟಿದ್ದಾರೋ ಅಲ್ಲಾಹನೇ ಬಲ್ಲ. ಸಂಘಟನೆಯ ಬಗ್ಗೆ ಗಿಳಿಪಾಠ ಹೇಳಿಕೊಡಲು ಬಂಡ ನಕಲಿಗಳಿಗಳೊಂದಿಗೆ, ನಮ್ಮ ಸಂಘಟನೆಗೆ ಭದ್ರವಾದ ಅಡಿಪಾಯವಿದೆ, ಉಲಾಮಾ ನೇತ್ರತ್ವವಿದೆ, ಆದರ್ಶವಿದೆ. ಉಲಮಾ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ನಮ್ಮ ಸಂಘಟನೆಗೆ ಯಾವುದೊ ಚಾಲಿಪೋಲಿಗಳ ಉಪದೇಶ ಅಗತ್ಯವಿಲ್ಲ. *ಯೂನಿಟ್ ಮಟ್ಟದಿಂದ ಹಿಡಿದು ರಾಷ್ಟ್ರೀಯ ಮಟ್ಟದವರೆಗೂ ವ್ಯವಸ್ಥಿತವಾಗಿ ಕಾರ್ಯಾಚರಣೆ ಮಾಡಲು ಬೇಕಾದ ಎಲ್ಲ ರೀತಿಯ ಸಜ್ಜೀಕರಣ ನಮ್ಮ ಉಲಮಾಗಳ ಮುಖಾಂತರ ಪಡೆಯುತ್ತಿದ್ದೇವೆ. ಅಗ್ರಗಣ್ಯ ಉಲಮಾಗಳ ನೇತೃತ್ವ ಮತ್ತು ಮಾರ್ಗದರ್ಶನವೇ ನಮ್ಮ ವಿಜಯದ ರಹಸ್ಯ.*

ಸಮುದಾಯದ ಯಾವುದೇ ವ್ಯಕ್ತಿಗೆ ಅನ್ಯಾಯವಾದಾಗಲೂ ಅದಕ್ಕೆ ಸ್ಪಂದಿಸಿ ಪರಿಹಾರೋಪಾಯವನ್ನು ಕಂಡುಕೊಂಡ ಹಿರಿಮೆಯನ್ನು ಹೊತ್ತ ನಮ್ಮ ಸಂಘ ಕುಟುಂಬ ಯಾವತ್ತೂ ಘೋಷಿಸಿದ ಕಾರ್ಯಕ್ರಮದಿಂದ ಹಿಂದೆ ಸರಿದಿಲ್ಲ. ಇತಿಹಾಸದ ಪುಟಗಳಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದೇವೆ.
ನಿಮ್ಮ ಕಾರ್ಯಕರ್ತನೆಂದು ಹೇಳಿಕೊಂಡು ಹೋರಾಟದ ಹೆಸರಿನಲ್ಲಿ ಬೀದಿಗಿಳಿದು ಚಲೋ ನಡೆಸಲು ಹೊರಟ ನಿಮ್ಮ ಗತಿ ಏನಾಯಿತು? ಮೇ 5 ನೇ ತಾರೀಕು ಬರಬೇಕಾಗಿದ್ದ ನಿಮ್ಮ ಸಿ.ಓ.ಡಿ ತನಿಖೆಯ ರಿಪೋರ್ಟ್ ಎಲ್ಲಿ? ಅದರ ನಂತರ ನಡೆಸಬೇಕಾಗಿದ್ದ ಪ್ರತಿಭಟನೆ ಯಾರ ಆಮಿಷಕ್ಕೆ ಬಲಿಯಾಗಿದೆ? *ನಿಮ್ಮ ಒಬ್ಬ ಕಾರ್ಯಕರ್ತನಿಗೆ ನ್ಯಾಯ ತಂದುಕೊಡಲು ಸಾಧ್ಯವಾಗದ ಸಮುದಾಯಕ್ಕೆ ನ್ಯಾಯ ಒದಗಿಸುತ್ತಾರಂತೆ!!! ಕೇಳಲು ಹಿತವಾದರೂ ಕ್ರಿಯಾತ್ಮಕವಾಗಿ ಸಮುದಾಯದ ಒಡಕು ಮಾತ್ರ ಉಂಟಾಗುತ್ತಿದೆ. ಮಸೀದಿ, ಮದ್ರಸ, ಮಹಲ್ ಮುಂತಾದ ಕಡೆಗಳಲ್ಲಿ ತಮಗೆ ಅಧಿಕಾರ ಸಿಗಬೇಕೆಂದು ಬಯಸಿ ಕಮಿಟಿಗಳಲ್ಲಿ ತಮ್ಮ ಸಂಘಟನೆಯ ವ್ಯಕ್ತಿಗಳೇ ಇರಬೇಕೆಂದು ವಯಸ್ಕರ ಮುಂದೆ ಯುವತ್ವದ ಪೊಗರನ್ನು ತೋರಿಸಿ ಬೆದರಿಸಿ ಊರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿರುವ ಈ ಸಮೂಹವನ್ನು ಜನರು ಎಂದೋ ಅರಿತಿದ್ದಾರೆ. ಅದಕ್ಕೆ ತಕ್ಕ ಬೆಲೆಯನ್ನು ಕಲ್ಪಿಸಿದ್ದಾರೆ.  *ಅದರ ಫಲವೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಲ್ಟಿಯಾದ ಆಟೋ ಇನ್ನು ಚೇತರಿಸಿಕೊಳ್ಳದೆ ಇರುವುದು. ಬುದ್ದಿವಂತರ ಜಿಲ್ಲೆಗೆ ಹೆಸರುವಾಸಿಯಾಗಿರುವ ಧಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ನಕಲಿಗಳಿಗೆ ಅಸ್ತಿತ್ವ ಇಲ್ಲವೆಂದರಿತ ಈ ನಕಲಿಗಳು, ಬಡಪಾಯಿ ಉಲಮಾಗಳನ್ನು ಗುರಿಯಾಗಿಸಿ ಸಮುದಾಯದಲ್ಲಿ ಒಡಕನ್ನುಂಟುಮಾಡಲು ಶ್ರಮಿಸುತ್ತಿದೆ*.

ಯಾರದೋ ಸುಳ್ಳು ಮಾಹಿತಿಗಳಿಗೆ ಬಲಿಯಾದ ಬಡಪಾಯಿ ಮುಅ-ಲ್ಲಿಂಗಳು ಬಿ.ಜೆ.ಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮಹಾಪಾಪವೆಂಬಂತೆ ಬಿಂಬಿಸುತ್ತಿರುವ ಈ ನಕಲಿಗಳ ನಾಯಕರು ಒಂದೇ ಒಂದು ಬಿ.ಜೆ.ಪಿ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ ಮತ್ತು  ಬಿ.ಜೆ.ಪಿ ಆರ್.ಎಸ್.ಎಸ್ ಎಂಪಿ ಎಂ.ಎಲ್ .ಏ ಗಳೊಂದಿಗೆ ಒಟ್ಟುಗೂಡಿಲ್ಲ ಎಂದು ಹೇಳಲು ಸಾಧ್ಯವೇ? *ಇವರ ನಾಯಕರೇ ಬಿ.ಜೆ.ಪಿ ಆರ್.ಎಸ್.ಎಸ್ ಎಂಪಿ ಎಂ.ಎಲ್ .ಗಳೊಂದಿಗೆ ಭುಜಕ್ಕೆ ಭುಜ ಸೇರಿಸಿ ನಿಂತ ಫೋಟೋ ವೈರಲ್ ಆಗುತ್ತಿದ್ದರೂ ತುಟಿಪಿಟಿಕ್ ಎನ್ನದ ಈ ನಕಲಿಗಳು ಸುನ್ನತ್ ಜಮಾ-ಅತ್ತಿನ ಸಂಘಟನೆ ವಿರುದ್ಧ ಆರೋಪಗಳನ್ನು ಎತ್ತಿಕಟ್ಟುತ್ತಿರುವುದು ವಿಪರ್ಯಾಸವೇ ಸರಿ.*

ಇಲ್ಲಿ ಪ್ರತ್ಯೇಕವಾಗಿ ಗಮನಿಸಬೇಕಾದ ವಿಷಯ ವ್ಯಕ್ತಿಗತ ಅವಹೇಳನಕ್ಕಿಂತ ಹೆಚ್ಚಾಗಿ ಒಂದು ಸಂಘಟನೆಯ ಮೇಲಿನ ಆಕ್ರೋಶವೇ ಮುಗಿಲು ಮುಟ್ಟಿತ್ತು. *ವಾಯ್ಸ್ ಮತ್ತು ಟೆಕ್ಸ್ಟ್ ಮುಖಾಂತರ ಜಾಲತಾಣಗಳಲ್ಲಿ ಸಂಘಟನೆಯ ಮೇಲಿನ ಆಕ್ರೋಶವನ್ನು ಹೊರಹಾಕಿದ್ದ ಈ ನಕಲಿಗಳಿಗೆ ಸಂಘಟನೆ ನುಂಗಲಾರದ ತುತ್ತಾಗಿರುವುದರಲ್ಲಿ ಸಂಶಯವಿಲ್ಲ. *ಸಂಘಟನೆಯ ಲೆಟರ್ ಹೆಡ್ ಹಿಡಿದುಕೊಂಡು ಹೋದ ಹಾಗೆ ವರ್ತಿಸುತ್ತಿದ್ದ ನಕಲಿಗಳು ಯಾರನ್ನೋ ತೃಪ್ತಿ ಪಡಿಸಲು ಈ ರೀತಿಯ ಅಸಂಬದ್ಧ ವರ್ತನೆಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಿಲ್ಲ.*

*✍🏻nizzu4ever👁*
*ಉರುವಾಲು ಪದವು*
*niznam4ever@gmail.com*

No comments:

Post a Comment